Sunday 15 May 2011

ಜೀವನ-ಪಾವನ

ಮನದಲಿ ಹಿತ ಬಯಸುವ ಬಾವನೆ...
ಕಲ್ಮಶದ ಅರ್ಥವೇ ತಿಳಿಯದ ಚಿಂತನೆ..
ಒಡೆದ ಹೃದಯದ ಪ್ರತಿ ಚೂರುಗಳಲೂ...
ಕೇವಲ ಒಳಿತೇ ಅವಿತಿರುವ ಮನಸು...
ಇದನರಿತಿರುವ ಜೀವದ ಜೀವನ...
ನಿಜಕೂ ಅದು ಎಂದೆಂದಿಗೂ ಪಾವನ.

ಕಣ್ಣಿಂದ ಉರುಳಿದ ಪ್ರತಿ ಬಿಂದು...
ಮೊಳಕೆಯೊಡೆದು ಪುಷ್ಪವೃಷ್ಟಿ ಸುರಿಸಿದಾಗ...
ಬಾಳಲ್ಲಿ ಕತ್ತಲು ಕವಿದ ಕಷ್ಟದ ಕರಿಮೋಡ...
ಸಿಡಿದು ಸಂತಸವೆಂಬ ವರ್ಷದ ಮೂಲವಾದಾಗ..
ಅಂಥಹ ಪ್ರತಿ ಒಂದು ಜೀವನ...
ನಿಜಕೂ ಅದು ಎಂದೆಂದಿಗೂ ಪಾವನ.

ಹೆತ್ತವರ ಆಸರೆಯ ನೆರಲಲಿ ಬೆಳೆದು...
ನಂತರ ಹೆತ್ತವರಿಗೆ ಆಸರೆಯಾಗಿ ನಿಂತು..
ಅವರ ಮಗುವಾದರೂ, ಅವರ ಮ್ಮುಪ್ಪಿನಲಿ..
ಮಗುವಂತೆ ಪ್ರೀತಿಸಿ ಅವರನು ಪಾಲಿಸಿದಲಿ...
ಅಂತಹ ಪ್ರತಿಯೊಂದು ಜೀವನ...
ನಿಜಕೂ ಅದು ಎಂದೆಂದಿಗೂ ಪಾವನ.

ಕೇವಲ ಅಂಕೆಗಾಗಿ ಓದಿ ಮರೆಯದೆ..
ಕಲಿಯುವ ವಿದ್ಯೆಯ ಅರ್ಥಮಾಡಿ ಅರಿತು...
ಜಾನ ಸಂಪಾದಿಸುವ ಅರ್ಹತೆಯೊಂದಿಗೆ...
ಬಯಸಿದವರಿಗೆ ನೀಡುವ ಮನಸಿದ್ದಲ್ಲಿ...
ಅಂತಹ ಪ್ರತಿಯೊಂದು ಜೀವನ....
ನಿಜಕೂ ಅದು ಎಂದೆಂದಿಗೂ ಪಾವನ.

                   ಗೀಚಿದ್ದು :~ ರಂಜಿತಾ ಹೆಗ್ಡೆ. ಆರ್

No comments:

Post a Comment